ಸ್ವಾಮಿ ವಿವೇಕಾನಂದರ ಪುನರುಜ್ಜೀವನದ ಮಾರ್ಗದ ಸೂತ್ರಗಳು
ಹಿಂದುತ್ವದ ಕಿರಣದ ರೂಪದಲ್ಲಿ.. ಕಾವಿ ದಾರಿಯು ಕ್ರಾಂತಿಕಾರಿಯಾಗಿ.. ಸಿಡಿಲು ಸನ್ಯಾಸಿಯಾಗಿ.. ಜಗತ್ತಿಗೆ ವಿಶ್ವಮಾನವನಾಗಿ..
ಶ್ರೀ ರಾಮಕ್ರಷ್ಣರು ಜನಾಂಗದ ಹ್ರದಯವನ್ನು ಕಲುಕಿದರೆ ಸ್ವಾಮಿ ವಿವೇಕಾನಂದರು ಆತ್ಮವನ್ನು ಎಚ್ಚರಗೊಳಿಸಿದರು.
ಅವರ ವ್ಯಕ್ತಿತ್ವ ಶ್ರೀಮಂತವಾದದ್ದು ಗಹನವಾದದ್ದು ಸಂಕೀರ್ಣವಾದದ್ದು ಕೂಡ ಓದು-ಬರಹಗಳಿಗಿಂತ ಈ ದೇಶವಾಸಿಗಳ ಮೇಲೆ ವಿಶಿಷ್ಟ ಪ್ರಭಾವ ಅವರ ವ್ಯಕ್ತಿತ್ವ. ನಿಸ್ಸೀಮ ತ್ಯಾಗ ಸತತ ಕ್ರಿಯಾಶೀಲತೆ ಎಲ್ಲರೆಡೆಗೆ ಅಪರಿಮಿತ ಪ್ರೇಮ ಆಳವೂ ಸರ್ವಗ್ರಾಹಿಯೂ ಆದ ವಿವೇಚನೆ ತಮ್ಮ ಭಾವನೆಗಳ ಪ್ರಕಟೀಕರಣದಲ್ಲಿ ನಿರ್ಭಿಡೆ ಸಮಾಜದ ದೋಷಗಳನ್ನು ಟೀಕೆಸುವುದರಲ್ಲಿ ಕಾಠಿಣ್ಯವಿದ್ದರು ಜೊತೆಜೊತೆಗೆ ಎಳೆ ಮಗುವಿನಂತಹ ಸರಳತೆ - ಹೀಗೆ ನಮ್ಮ ಜಗತ್ತಿನ ಅಸಾಮಾನ್ಯ ವ್ಯಕ್ತಿ ಆಗಿದ್ದರು ಅವರು ..... ಪರಮಸತ್ಯದ ಸಾನ್ನಿಧ್ಯದಲ್ಲಿದ್ದ ಅತ್ಯುನ್ನತ ಯೋಗಿಯಾಗಿದ್ದಾರೆ.
ಪುನರುಜ್ಜೀವನದ ಮಾರ್ಗ ಕಾರ್ಯವನ್ನು ಹೇಗೆ ಆರಂಭಿಸಬೇಕು ಸ್ವಾಮೀಜಿ ಇದಕ್ಕೆ ಇವರು ಒಟ್ಟು 6 ಯೋಜನೆಗಳನ್ನು ಸಿದ್ಧಪಡಿಸಿದರು
1: ಯಾವುದನ್ನು ನಾಶಗೊಳಿಸದಿರಿ
2: ಜನರನ್ನು ಮೇಲೆತ್ತಿ
3: ನಿಮ್ಮ ಗತಕಾಲದ ಕಡೆಗೆ ನೋಡಿ
4: ದೇಶದ ಮಹಾಪುರುಷರನ್ನು ಗೌರವಿಸಿ
5: ಶಿಕ್ಷಣ ಆದ್ಯ ಅವಶ್ಯಕತೆ
6: ಯುವಕರು ಮುಂದೆ ಬರಬೇಕು
1: ಯಾವುದನ್ನು ನಾಶಗೊಳಿಸದಿರಿ
ಮತ್ತು ಮೊದಲು ನಾನು ಕೇಳುವುದಿಷ್ಟೇ ನಾಶಪಡಿಸಬೇಕು ಎಂಬ ಉಕ್ತಿಯನ್ನು ಪರಿಗಣಿಸಿ ಗಮನದಲ್ಲಿರಿಸಿ ಮೂರ್ತಿಭಂಜಕ ಸುಧಾರಕರು ಒಳಿತನ್ನು ಮಾಡುವುದಿಲ್ಲ ಯಾವುದನ್ನು ಒಡೆಯಬೇಡಿ ಯಾವುದನ್ನು ಹಾಳುಗೆಡವಬೇಡಿ ಅದರ ಬದಲು ನಿರ್ಮಿಸಿ ಸಾಧ್ಯವಾದರೆ ಸಹಾಯ ಮಾಡಿ ಅದಾಗದಿದ್ದರೆ ಕೈಕಟ್ಟಿಕೊಂಡು ನಿಲ್ಲಿ ಆಗುವುದು ಆಗುತ್ತದೆ ಯಾರಿಗೂ ಹಾನಿ ಉಂಟು ಮಾಡಬೇಡಿ ನಿಮಗೆ ಸಹಾಯ ನೀಡಲು ಆಗದಿದ್ದರೆ ಮನುಷ್ಯನು ಹೇಗೆ ಇದ್ದಾನೆ ಹಾಗೆ ಇರಲಿ ಬಿಡಿ ಅಲ್ಲಿಂದ ಕೆಳಕ್ಕೆ ನೂಕಬೇಡಿ ಮೇಲಕ್ಕೆತ್ತಿ
2: ಜನರನ್ನು ಮೇಲೆತ್ತಿ
ಅವರವರ ನಂಬಿಕೆಗಳಿಗೆ ಹಾನಿ ಉಂಟುಮಾಡದೆ ಜನರ ಏಳಿಗೆಯನ್ನು ಉಂಟುಮಾಡಬೇಕು ಎಂಬ ಧ್ಯೇಯವು ನಿಮ್ಮ ಕಣ್ಣು ಮುಂದಿರಲಿ. ಜನರು ಗುಡಿಸಲುಗಳಲ್ಲಿ ವಾಸವಾಗಿದಾರೆ ಎಂಬುದನ್ನು ನೆನಪಿಡಿ ರಾಷ್ಟ್ರದ ಭಾಗ್ಯವು ಜನರ ಸ್ಥಿತಿಗತಿಯ ಮೇಲೆ ನಿರ್ಭರವಾಗಿದೆ ನೀವು ಅವರನ್ನು ಮೇಲೆತ್ತಬಲ್ಲಿರಾ ಅವರು ತಮ್ಮ ಸಹಜವಾದ ಆಧ್ಯಾತ್ಮಿಕತೆಯನ್ನು ಕಳೆದುಕೊಳ್ಳುವಂತೆ ಹಾಗೆ ಮಾಡದೆ ಈಗಾಗಲೇ ಕಳೆದುಕೊಂಡಿರುವ ವ್ಯಕ್ತಿತ್ವವನ್ನು ಅವರಿಗೆ ಹಿಂತಿರುಗಿಸಲು ನಿಮಗೆ ಆಗುತ್ತದೆಯೇ ಭಾರತದ ಬಡ ಹಾಗೂ ದಿನ ಸ್ಥಿತಿಯಲ್ಲಿರುವ ಜನರನ್ನು ನಾವು ಕಾಣುತ್ತಿರುವ ರೀತಿಯಲ್ಲಿ ನೆನೆಸಿಕೊಂಡರೆ ನನ್ನ ಹೃದಯ ಹಿಡಿದಂತಾಗುತ್ತದೆ ಆ ಸ್ಥಿತಿಯಿಂದ ಪಾರಾಗಲು ಅವಕಾಶವಿಲ್ಲ ಮೇಲೇರಲು ದಾರಿಯೂ ಇಲ್ಲ. ಬಡತನದಿಂದ ನರಳುತ್ತಿರುವ ಜನರಿಗೆ ದಿನ ಸ್ಥಿತಿಯಲ್ಲಿ ಇರುವವರಿಗೆ ಪಾಪಿಷ್ಟರಿಗೆ ಸ್ನೇಹಿತರಲ್ಲಿ ಯಾವ ಸಹಾಯವೂ ಇಲ್ಲ ದಿನದಿಂದ ದಿನಕ್ಕೆ ಅದಕ್ಕೆ ಇನ್ನೂ ಕೆಳಗೆ ಹೋಗುತ್ತಿದ್ದಾರೆ. ಪ್ರಪಾತದಲ್ಲಿ ಕುಸಿದು ಹೋಗುತ್ತಿದ್ದಾರೆ ಹಿಂದಿನ ಕೆಲ ವರ್ಷಗಳಲ್ಲಿ ಚಿಂತನಶೀಲರಾದ ಕೆಲವರು ಈ ಸ್ಥಿತಿಯನ್ನು ಆಗುತ್ತಿದ್ದಾರೆ ಆದರೆ ದುರಾದೃಷ್ಟವಶಾತ್ ಈ ದುಸ್ಥಿತಿಗೆ ಹಿಂದೂ ಧರ್ಮವೇ ಕಾರಣ ಎಂದು ಅವರ ಮೇಲೆ ಬಟ್ಟು ಮಾಡಿ ತೋರಿಸುತ್ತಾರೆ ಅವರ ಪ್ರಕಾರ ಇದನ್ನು ಸುಧಾರಿಸುವ ಮಾರ್ಗವೆಂದರೆ ಜಗತ್ತಿನ ಉತ್ತಮೋತಮ ಹಿಂದೂ ಧರ್ಮವನ್ನು ಪುಡಿ ಪುಡಿ ಮಾಡುವುದು ನನ್ನ ಗೆಳೆಯರೇ ಕೇಳಿ ನಾನು ಭಗವಂತನ ಅನುಗ್ರಹದಿಂದ ಇದರ ರಹಸ್ಯವನ್ನು ಕಂಡುಹಿಡಿದಿದ್ದೇನೆ ಧರ್ಮದ್ದೇನು ತಪ್ಪಿಲ ಹಾಗೆ ನೋಡಿದರೆ ಪ್ರತಿಯೊಂದು ಜೀವವು ನಿನ್ನ ಆತ್ಮಕ್ಕೆ ಬೇರೆಬೇರೆ ಎಂದು ನಮ್ಮ ಧರ್ಮ ಉಪದೇಶಿಸುತ್ತದೆ ಎಲ್ಲಿ ಇರುವುದು ಒಂದೇ ಆತ್ಮ.
3: ನಿಮ್ಮ ಗತಕಾಲದ ಕಡೆ ನೋಡಿ
ಭೂತದಿಂದ ಭವಿಷ್ಯತ ನಿರ್ಮಾಣವಾಗಿದೆ ಸಾಧ್ಯವಾದಷ್ಟು ಹಿಂದಕ್ಕೆ ನೋಡಿ ಹಿಂದಿನ ಶಾಶ್ವತವಾದ ಬತ್ತಿಹೋಗದ ಬುಗ್ಗೆಗಳ ನೀರನ್ನು ಚೆನ್ನಾಗಿ ಹೀರಿ ಅದನ್ನು ತುಂಬಾ ಕುಡಿರಿ ನಂತರ ಮುಂದೆ ನೋಡಿ ಮುಂದಕ್ಕೆ ಸಾಗಿ ಭಾರತವನ್ನು ಹಿಂದಿನಕ್ಕಿಂತ ಉಜ್ವಲವನ್ನಾಗಿ ಮಾಡಿ ಉನ್ನತವನ್ನಾಗಿ ಮಾಡಿ ನಮ್ಮ ಪೂರ್ವಜರು ಮಹಾನ್ ವ್ಯಕ್ತಿಗಳಾಗಿದ್ದಾರು ಮೊಟ್ಟಮೊದಲು ಅದನ್ನು ನೆನಪಿಸಿಕೊಳ್ಳಬೇಕು ನಮ್ಮ ಅಸ್ತಿತ್ವದ ಮೂಲವನ್ನು ನಾವು ತಿಳಿದುಕೊಳ್ಳಬೇಕು ಈಗಿರುವುದಕ್ಕಿಂತ ಮಹತ್ತಾದ ಭಾರತವನ್ನು ನಾವು ನಿರ್ಮಾಣ ಮಾಡಬೇಕು.
ಈಚಿನ ದಿನಗಳಲ್ಲಿ ಯಾರೂ ತಮ್ಮ ಹಿಂದಿನ ದಿನಗಳ ಕಡೆಗೆ ನೋಡುತ್ತಿರುತ್ತಾರೆಯೋ ಅವರನ್ನು ಎಲ್ಲರೂ ತೆಗಳುತ್ತಾರೆ ಭಾರತದ ಇಂತಹ ಎಲ್ಲಾ ಕಷ್ಟಗಳಿಗೂ ದುಃ ಸ್ಥಿತಿಗೂ ಹಿಂದಿನದನ್ನು ನೋಡುತ್ತಿರುವುದೇ ಕಾರಣ ಎಂದು ಹೇಳಲಾಗುತ್ತಿದೆ ಆದರೆ ನನಗೆ ಇದಕ್ಕೆ ತದ್ವಿರುದ್ಧವಾದುದೇ ಸರಿ ಎಂದು ತೋರುತ್ತದೆ ಎಲ್ಲಿಯತನಕ ತನ್ನ ಗತಕಾಲವನ್ನು ಮರೆಯುತ್ತೇವೆ ಅಲ್ಲಿಯತನಕ ಹಿಂದೂ ರಾಷ್ಟ್ರ ಜಡವಾಗಿತ್ತು ಅದಕ್ಕೆ ಮಂಕು ಕವಿದಿತ್ತು ಅದು ಹಿಂದಿನದ್ದನ್ನು ಅವಲೋಕಿಸಲು ಆರಂಭಿಸುತ್ತಿದ್ದಂತೆಯೇ ಜೀವನದ ಎಲ್ಲ ಮಗ್ಗುಲುಗಳಲ್ಲಿ ಹೊಸ ಚೈತನ್ಯ ವ್ಯಕ್ತವಾಗುತ್ತಿದೆ ಹಿಂದಿನದವರಿಂದ ಭವಿಷ್ಯವನ್ನು ಏರಕಹೂಯ್ಯಬೇಕು ಮುಂದಿನ ಭವಿಷ್ಯತ್ ಆಗುತ್ತದೆ.
ಹಿಂದುಗಳ ತಮ್ಮ ಹಿಂದಿನದನ್ನು ಹೆಚ್ಚು ಹೆಚ್ಚು ಅಧ್ಯಯನ ಮಾಡಿದಷ್ಟು ಭಾರತದ ಭವಿಷ್ಯವು ಹೆಚ್ಚೆಚ್ಚು ಉಜ್ವಲವಾಗವಾಗುವುದು ಯಾರಾದರೂ ತಮ್ಮ ಗತಕಾಲದ ವೈಭವದ ಸಂಗತಿಯನ್ನು ಪ್ರತಿಯೊಬ್ಬರ ಮನೆಯ ಬಾಗಿಲಿಗೆ ತಂದು ಮುಟ್ಟಿಸುತ್ತಾರೂ ಅವರು ರಾಷ್ಟ್ರಕ್ಕೆ ಹಿತವನ್ನು ಉಂಟುಮಾಡುವ ಮಹಾನ್ ದೇಶಭಕ್ತ ಹಾಗೂ ಸೇವಕರು ಭಾರತದ ಅವನತಿಯಾದುದು ನಮ್ಮ ಪೂರ್ವಜರು ರೂಪಿಸಿದ್ದ ನೀತಿ-ನಿಯಮಗಳು ಸಂಪ್ರದಾಯಗಳು ಕೆಟ್ಟ ವಾಗಿದ್ದವು ಎಂಬ ಕಾರಣಕ್ಕಲ್ಲ ಅವುಗಳನ್ನು ನ್ಯಾಯೋಚಿತ ನಿರ್ಧಾರದಿಂದ ಜಾರಿಗೆ ತರದೇ ಇದ್ದದ್ದರಿಂದ.
3: ದೇಶದ ಮಹಾಪುರುಷರನ್ನು ಗೌರವಿಸಿ
ಮಹಾತ್ಮರ ಪೂಜೆಯನ್ನು ನೀವು ಉಪಕ್ರಮಮಾಡಬೇಕು ನಿತ್ಯಸತ್ಯಗಳನ್ನು ಯಾರು ಸಾಕ್ಷಾತ್ಕಾರಿಕೊಂಡಿದ್ದಾರೆಯೊ ಅವರ ಆದರ್ಶಪುರಷರನ್ನಾಗಿಸಿಕೊಂಡು ಅವರ ಹಾದಿಯನ್ನು ಅನುಸರಿಸಲು ಜನರನ್ನು ಪ್ರೇರೇಪಿಸಬೇಕು ಭಾರತದಲ್ಲಿ ಶ್ರೀ ರಾಮಚಂದ್ರ ಶ್ರೀ ಕ್ರಷ್ಣ ಮತ್ತು ಶ್ರೀ ರಾಮಕೃಷ್ಣರಂತಹ ಮಹಾಪುರುಷರು ನಮ್ಮ ಆದರ್ಶವಾಗಬೇಕು ಶ್ರೀ ರಾಮಚಂದ್ರ ಮತ್ತು ಮಹಾವೀರ ಇವರುಗಳ ಪೂಜೆಯನ್ನು ಈ ದೇಶದಲ್ಲಿ ಪ್ರಚಲಿತಗೊಳಿಸಬಲ್ಲಿರಾ ಸಿಂಹಗರ್ಜನೆಯಂತಹ ದ್ವನಿಯಿಂದ ಗೀತೆಯನ್ನು ಉಪದೇಶಿಸುತ್ತಿರುವ ಶ್ರೀ ಕ್ರಷ್ಣನ ಪೂಜೆಯನ್ನು ಜಾರಿಗೆ ತರಬಲ್ಲಿರಾ ಅತಂಹ ಓರ್ವ ವೀರ ಯಾರ ನರ ನಾಡಿಗಳಲ್ಲೂ ಮಡಿಯಿಂದ ಅಡಿಯವರಿಗೂ ಪ್ರಚಂಡ ರಜಸ್ಸು ರಭಸದಿಂದ ಉತ್ಸಾಹದಿಂದ ಪ್ರವಹಿಸುತ್ತಿದೆಯೊ ಅಂತಹ ವೀರ ಯಾರ ಸತ್ಯವನ್ನು ತಿಳಿಯಲು ಧೈರ್ಯವಾಗಿ ಮೃತ್ಯುವನ್ನೇ ಎದರಿಸುತ್ತಾನೆಯೋ ತ್ಯಾಗವು ಯಾರ ಕವಚವೊ ವಿವೇಕವು ಕತ್ತಿಯೊ ಅಂತಹ ವೀರನ ಆದರ್ಶ ನಮಗಿಂದು ಬೇಕಾಗಿದೆ.
4: ಶಿಕ್ಷಣ ಆದ್ಯ ಅವಶ್ಯಕತೆ
ಶಿಕ್ಷಣ ಶಿಕ್ಷಣ ಕೇವಲ ಶಿಕ್ಷಣ ಯೂರೋಪಿನ ಅನೇಕ ನಗರಗಳ ಮೂಲಕ ಪ್ರಯಾಣ ಮಾಡುತ್ತಿದ್ದಾಗ ಅಲ್ಲಿನ ಬಡಜನರಿಗೂ ಕೂಡಾ ಸೌಲಭ್ಯಗಳು ಮತ್ತು ಶಿಕ್ಷಣ ಲಭಿಸಿರುವುದನ್ನು ಕಂಡಾಗ ನಮ್ಮವರೇ ಆದ ಜನರ ಸ್ಥಿತಿ ನಮ್ಮ ಕಣ್ಣಮುಂದೆ ಬರುತ್ತಿತ್ತು ಮತ್ತು ಅದರಿಂದಾಗಿ ಕಣ್ಣುಗಳಲ್ಲಿ ನೀರು ತುಂಬುತ್ತಿತ್ತು ಏತಕ್ಕಾಗಿ ಹೀಗೆ ಅದಕ್ಕೆ ಕಾರಣ ಶಿಕ್ಷಣ ಎಂಬುದು ನನಗೆ ಅರಿವಾಯಿತು ಶಿಕ್ಷಣದಿಂದಾಗಿ ಆತ್ಮವಿಶ್ವಾಸ ಮೂಡುತ್ತದೆ ಈ ಆತ್ಮವಿಶ್ವಾಸದಿಂದ ಆ ದೇಶಗಳ ಜನರಲ್ಲಿ ಅಂತರ್ಯಾಮಿಯಾಗಿರುವ ಬ್ರಹ್ಮನು ಜಾಗ್ರತನಾಗುತ್ತಾನೆ ಇದ್ದಾನೆ ಆದರೆವನಮ್ಮಲ್ಲಿರುವ ಬ್ರಹ್ಮನು ಕ್ರಮೇಣ ಸುಪ್ತನಾಗುತ್ತಾ ಇದ್ದಾನೆ
ಶಿಕ್ಷಣವೆಂದರೆ ನಿಮ್ಮ ಮೆದುಳಿನಲ್ಲಿ ಆಗಾದವಾದ ಮಾಹಿತಿಗಳನ್ನು ತುಂಬಿ ಅವು ಅಲ್ಲಿ ಗೊಂದಲವನ್ನು ಉಂಟುಮಾಡುವುದಲ್ಲ ಅವುಗಳನ್ನು ಅರಗಿಸಿಕೊಳ್ಳದೇ ಅರ್ಜೀಣವನ್ನು ಉಂಟುಮಾಡುವುದಲ್ಲ ಜೀವನವನ್ನು ನಿರ್ಮಾಣ ಮಾಡುವ ಚಾರಿತ್ರ್ಯವನ್ನು ಬೆಳಿಸುವ ವಿಚಾರಗಳನ್ನು ಅಳವಡಿಸಿಕೊಳ್ಳುವಂತೆ ಮಾಡುವುದೇ ಶಿಕ್ಷಣ ಯಾವುದಾದರೂ ಐದು ವಿಚಾರಗಳನ್ನು ಅರ್ಥಮಾಡಿಕಂಡು ವಿಶಿಷ್ಟ ಲಕ್ಷಣವನ್ನಾಗಿ ಮಾಡಿಕೊಂಡರೆ ಸಾಕು ಪುಸ್ತಕಾಲಯದಲ್ಲಿರುವುದನ್ನೆಲ್ಲ ಕಂಠಸ್ಥ ಮಾಡಿ ಕೊಂಡಿರುವವರಿಗಿಂತ ನೀನು ಹೆಚ್ಚು ವಿದ್ಯಾವಂತ ನಮಗೆ ಅವಶ್ಯಕವಾದ ಆದರ್ಶ ಶಿಕ್ಷಣ ಹೇಗಿರಬೇಕೆಂದರೆ ನಮ್ಮ ದೇಶದಲ್ಲಿನ ಶಿಕ್ಷಣ ಆಧ್ಯಾತ್ಮಿಕ ದೃಷ್ಟಿಯುಳ್ಳದ್ದಾಗಿರಬೇಕು ಜಾತ್ಯತೀತವಾಗಿರಬೇಕು ಅದು ನಮ್ಮ ರಾಷ್ಟ್ರೀಯ ಚಿಂತನದಾರೆ ರಾಷ್ಟ್ರೀಯ ವಿಧಿವಿದಾನಗಳಿಗೆ ಅನುಸಾರವಾಗಿ ಇರಬೇಕು ಶಿಕ್ಷಣ ಕ್ಷೇತ್ರವು ನಮ್ಮ ಹಿಡಿತದಲ್ಲಿ ಇರಬೇಕು.
6: ಯುವಕರು ಮುಂದೆ ಬರಬೇಕು
ಜೀವಿತವು ಅಲ್ಪಕಾಲದ್ದು ಆದ್ದರಿಂದ ಜಾಗ್ರತಗೊಳ್ಳಿ ನಿಮ್ಮ ಹಂಬಲ ವಕೀಲರಾಗುವುದು ಜಗಳ ತೆಗೆಯುವುದು ಇದೇ ಮುಂತಾದ ವ್ರತ್ತಿಗಳಿಗೆ ಜೋತು ಬೀಳುವುದಕ್ಕಿಂತ ಇನ್ನೂ ಮಹತ್ವರ ಕಾರ್ಯವನ್ನು ಮಾಡಬೇಕಾಗಿದೆ ಎಲ್ಲ ಕಾರ್ಯಗಳಿಗಿಂತ ಮಹತ್ತಾದ ಕಾರ್ಯವೆಂದರೆ ನಿನ್ನ ಜನರ ಹಿತಕ್ಕಾಗಿ ಮಾನವತೆಯ ಹಿತಕ್ಕಾಗಿ ನಿನ್ನನು ನೀನು ಸಮರ್ಥಿಸಿಕೊಳ್ಳುವುದು ಅದಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡುವುದು ಈ ಜೀವನದಲ್ಲಿ ಏನಿದೆ ಮಹಾ ಒಂದು ಶ್ರೇಷ್ಠವಾದ ಆದರ್ಶವನ್ನು ಅರಿಸಿಕೊಳ್ಳುವ ಮತ್ತು ಅದಕ್ಕಾಗಿ ಜೀವನವನ್ನು ಮುಡುಪಾಗಿಡೋಣ ಇದು ನಮ್ಮ ದೊಡ್ಡ ಸಂಕಲ್ಪವಾಗಬೇಕು ನನ್ನ ವಿಶ್ವಾಸ ಯುವಪೀಳಿಗೆಯಲ್ಲಿ ಇದೆ ಇಂದಿನ ಪೀಳಿಗೆಯಲ್ಲಿ ಅವರ ಸಮಸ್ಯೆಗಳನ್ನು ಬಗೆಹರಿಸಿ ಕಾರ್ಯವನ್ನು ನಿಭಾಯಿಸುತ್ತಾರೆ ಸಿಂಹಗಳಂತೆ ತಮ್ಮ ಕಾರ್ಯವನ್ನು ಮಾಡಲು ಮುಂದೆ ಬರುವ ಯುವಕರಿಗಾಗಿ ಮೂರು ಅವಶ್ಯಕತೆಗಳನ್ನು ಸ್ವಾಮಿಜೀ ಸೂಚಿಸಿದ್ದಾರೆ
1:ಅಂತಃಕರಣಪೂರ್ವಕ ಸ್ಪಂದಿಸಬೇಕು
2:ಸಮಸ್ಯೆಗೆ ಪರಿಹಾರ ಗೊತ್ತಿರಬೇಕು
3:ಪರಿಶುದ್ದವಾದ ಉದ್ದೇಶ ಮತ್ತು ಆದಮ್ಯ ಸಂಕಲ್ಪವಾಗಬೇಕು
ಸ್ವಾಮಿ ವಿವೇಕಾನಂದರು ಈ ಆರು ಪುನರುಜ್ಜೀವನ ಮಾರ್ಗವನ್ನು ನಮಗೆ ರಚಿಸಿ ಕೊಟ್ಟು ಹೋಗಿದ್ದಾರೆ ಈ ಎಲ್ಲಾ ಮಾರ್ಗವನ್ನು ನಾವು ಕಾರ್ಯರೂಪಕ್ಕೆ ತರುವುದು ನಮ್ಮ ಯುವ ಪೀಳಿಗೆ ಯಲ್ಲಿದೆ ಆದಷ್ಟು ಬೇಗ ಸ್ವಾಮಿ ವಿವೇಕಾನಂದರ ಯೋಜನೆಗಳು ಕಾರ್ಯಗತಗೊಳಿಸಬೇಕು. ಪ್ರಕಾರ ರಾಷ್ಟ್ರವಾದಿಯಾದ ಶ್ರೀ ಸ್ವಾಮಿ ವಿವೇಕಾನಂದ ಜಯಂತಿಯ ಹಾರ್ದಿಕ ಶುಭಾಶಯಗಳು.
-ಮನೋಜ್ ಕಪ್ಪತನವರ
ಹಿಂದುತ್ವದ ಕಿರಣದ ರೂಪದಲ್ಲಿ.. ಕಾವಿ ದಾರಿಯು ಕ್ರಾಂತಿಕಾರಿಯಾಗಿ.. ಸಿಡಿಲು ಸನ್ಯಾಸಿಯಾಗಿ.. ಜಗತ್ತಿಗೆ ವಿಶ್ವಮಾನವನಾಗಿ..
ಶ್ರೀ ರಾಮಕ್ರಷ್ಣರು ಜನಾಂಗದ ಹ್ರದಯವನ್ನು ಕಲುಕಿದರೆ ಸ್ವಾಮಿ ವಿವೇಕಾನಂದರು ಆತ್ಮವನ್ನು ಎಚ್ಚರಗೊಳಿಸಿದರು.
ಅವರ ವ್ಯಕ್ತಿತ್ವ ಶ್ರೀಮಂತವಾದದ್ದು ಗಹನವಾದದ್ದು ಸಂಕೀರ್ಣವಾದದ್ದು ಕೂಡ ಓದು-ಬರಹಗಳಿಗಿಂತ ಈ ದೇಶವಾಸಿಗಳ ಮೇಲೆ ವಿಶಿಷ್ಟ ಪ್ರಭಾವ ಅವರ ವ್ಯಕ್ತಿತ್ವ. ನಿಸ್ಸೀಮ ತ್ಯಾಗ ಸತತ ಕ್ರಿಯಾಶೀಲತೆ ಎಲ್ಲರೆಡೆಗೆ ಅಪರಿಮಿತ ಪ್ರೇಮ ಆಳವೂ ಸರ್ವಗ್ರಾಹಿಯೂ ಆದ ವಿವೇಚನೆ ತಮ್ಮ ಭಾವನೆಗಳ ಪ್ರಕಟೀಕರಣದಲ್ಲಿ ನಿರ್ಭಿಡೆ ಸಮಾಜದ ದೋಷಗಳನ್ನು ಟೀಕೆಸುವುದರಲ್ಲಿ ಕಾಠಿಣ್ಯವಿದ್ದರು ಜೊತೆಜೊತೆಗೆ ಎಳೆ ಮಗುವಿನಂತಹ ಸರಳತೆ - ಹೀಗೆ ನಮ್ಮ ಜಗತ್ತಿನ ಅಸಾಮಾನ್ಯ ವ್ಯಕ್ತಿ ಆಗಿದ್ದರು ಅವರು ..... ಪರಮಸತ್ಯದ ಸಾನ್ನಿಧ್ಯದಲ್ಲಿದ್ದ ಅತ್ಯುನ್ನತ ಯೋಗಿಯಾಗಿದ್ದಾರೆ.
ಪುನರುಜ್ಜೀವನದ ಮಾರ್ಗ ಕಾರ್ಯವನ್ನು ಹೇಗೆ ಆರಂಭಿಸಬೇಕು ಸ್ವಾಮೀಜಿ ಇದಕ್ಕೆ ಇವರು ಒಟ್ಟು 6 ಯೋಜನೆಗಳನ್ನು ಸಿದ್ಧಪಡಿಸಿದರು
1: ಯಾವುದನ್ನು ನಾಶಗೊಳಿಸದಿರಿ
2: ಜನರನ್ನು ಮೇಲೆತ್ತಿ
3: ನಿಮ್ಮ ಗತಕಾಲದ ಕಡೆಗೆ ನೋಡಿ
4: ದೇಶದ ಮಹಾಪುರುಷರನ್ನು ಗೌರವಿಸಿ
5: ಶಿಕ್ಷಣ ಆದ್ಯ ಅವಶ್ಯಕತೆ
6: ಯುವಕರು ಮುಂದೆ ಬರಬೇಕು
1: ಯಾವುದನ್ನು ನಾಶಗೊಳಿಸದಿರಿ
ಮತ್ತು ಮೊದಲು ನಾನು ಕೇಳುವುದಿಷ್ಟೇ ನಾಶಪಡಿಸಬೇಕು ಎಂಬ ಉಕ್ತಿಯನ್ನು ಪರಿಗಣಿಸಿ ಗಮನದಲ್ಲಿರಿಸಿ ಮೂರ್ತಿಭಂಜಕ ಸುಧಾರಕರು ಒಳಿತನ್ನು ಮಾಡುವುದಿಲ್ಲ ಯಾವುದನ್ನು ಒಡೆಯಬೇಡಿ ಯಾವುದನ್ನು ಹಾಳುಗೆಡವಬೇಡಿ ಅದರ ಬದಲು ನಿರ್ಮಿಸಿ ಸಾಧ್ಯವಾದರೆ ಸಹಾಯ ಮಾಡಿ ಅದಾಗದಿದ್ದರೆ ಕೈಕಟ್ಟಿಕೊಂಡು ನಿಲ್ಲಿ ಆಗುವುದು ಆಗುತ್ತದೆ ಯಾರಿಗೂ ಹಾನಿ ಉಂಟು ಮಾಡಬೇಡಿ ನಿಮಗೆ ಸಹಾಯ ನೀಡಲು ಆಗದಿದ್ದರೆ ಮನುಷ್ಯನು ಹೇಗೆ ಇದ್ದಾನೆ ಹಾಗೆ ಇರಲಿ ಬಿಡಿ ಅಲ್ಲಿಂದ ಕೆಳಕ್ಕೆ ನೂಕಬೇಡಿ ಮೇಲಕ್ಕೆತ್ತಿ
2: ಜನರನ್ನು ಮೇಲೆತ್ತಿ
ಅವರವರ ನಂಬಿಕೆಗಳಿಗೆ ಹಾನಿ ಉಂಟುಮಾಡದೆ ಜನರ ಏಳಿಗೆಯನ್ನು ಉಂಟುಮಾಡಬೇಕು ಎಂಬ ಧ್ಯೇಯವು ನಿಮ್ಮ ಕಣ್ಣು ಮುಂದಿರಲಿ. ಜನರು ಗುಡಿಸಲುಗಳಲ್ಲಿ ವಾಸವಾಗಿದಾರೆ ಎಂಬುದನ್ನು ನೆನಪಿಡಿ ರಾಷ್ಟ್ರದ ಭಾಗ್ಯವು ಜನರ ಸ್ಥಿತಿಗತಿಯ ಮೇಲೆ ನಿರ್ಭರವಾಗಿದೆ ನೀವು ಅವರನ್ನು ಮೇಲೆತ್ತಬಲ್ಲಿರಾ ಅವರು ತಮ್ಮ ಸಹಜವಾದ ಆಧ್ಯಾತ್ಮಿಕತೆಯನ್ನು ಕಳೆದುಕೊಳ್ಳುವಂತೆ ಹಾಗೆ ಮಾಡದೆ ಈಗಾಗಲೇ ಕಳೆದುಕೊಂಡಿರುವ ವ್ಯಕ್ತಿತ್ವವನ್ನು ಅವರಿಗೆ ಹಿಂತಿರುಗಿಸಲು ನಿಮಗೆ ಆಗುತ್ತದೆಯೇ ಭಾರತದ ಬಡ ಹಾಗೂ ದಿನ ಸ್ಥಿತಿಯಲ್ಲಿರುವ ಜನರನ್ನು ನಾವು ಕಾಣುತ್ತಿರುವ ರೀತಿಯಲ್ಲಿ ನೆನೆಸಿಕೊಂಡರೆ ನನ್ನ ಹೃದಯ ಹಿಡಿದಂತಾಗುತ್ತದೆ ಆ ಸ್ಥಿತಿಯಿಂದ ಪಾರಾಗಲು ಅವಕಾಶವಿಲ್ಲ ಮೇಲೇರಲು ದಾರಿಯೂ ಇಲ್ಲ. ಬಡತನದಿಂದ ನರಳುತ್ತಿರುವ ಜನರಿಗೆ ದಿನ ಸ್ಥಿತಿಯಲ್ಲಿ ಇರುವವರಿಗೆ ಪಾಪಿಷ್ಟರಿಗೆ ಸ್ನೇಹಿತರಲ್ಲಿ ಯಾವ ಸಹಾಯವೂ ಇಲ್ಲ ದಿನದಿಂದ ದಿನಕ್ಕೆ ಅದಕ್ಕೆ ಇನ್ನೂ ಕೆಳಗೆ ಹೋಗುತ್ತಿದ್ದಾರೆ. ಪ್ರಪಾತದಲ್ಲಿ ಕುಸಿದು ಹೋಗುತ್ತಿದ್ದಾರೆ ಹಿಂದಿನ ಕೆಲ ವರ್ಷಗಳಲ್ಲಿ ಚಿಂತನಶೀಲರಾದ ಕೆಲವರು ಈ ಸ್ಥಿತಿಯನ್ನು ಆಗುತ್ತಿದ್ದಾರೆ ಆದರೆ ದುರಾದೃಷ್ಟವಶಾತ್ ಈ ದುಸ್ಥಿತಿಗೆ ಹಿಂದೂ ಧರ್ಮವೇ ಕಾರಣ ಎಂದು ಅವರ ಮೇಲೆ ಬಟ್ಟು ಮಾಡಿ ತೋರಿಸುತ್ತಾರೆ ಅವರ ಪ್ರಕಾರ ಇದನ್ನು ಸುಧಾರಿಸುವ ಮಾರ್ಗವೆಂದರೆ ಜಗತ್ತಿನ ಉತ್ತಮೋತಮ ಹಿಂದೂ ಧರ್ಮವನ್ನು ಪುಡಿ ಪುಡಿ ಮಾಡುವುದು ನನ್ನ ಗೆಳೆಯರೇ ಕೇಳಿ ನಾನು ಭಗವಂತನ ಅನುಗ್ರಹದಿಂದ ಇದರ ರಹಸ್ಯವನ್ನು ಕಂಡುಹಿಡಿದಿದ್ದೇನೆ ಧರ್ಮದ್ದೇನು ತಪ್ಪಿಲ ಹಾಗೆ ನೋಡಿದರೆ ಪ್ರತಿಯೊಂದು ಜೀವವು ನಿನ್ನ ಆತ್ಮಕ್ಕೆ ಬೇರೆಬೇರೆ ಎಂದು ನಮ್ಮ ಧರ್ಮ ಉಪದೇಶಿಸುತ್ತದೆ ಎಲ್ಲಿ ಇರುವುದು ಒಂದೇ ಆತ್ಮ.
3: ನಿಮ್ಮ ಗತಕಾಲದ ಕಡೆ ನೋಡಿ
ಭೂತದಿಂದ ಭವಿಷ್ಯತ ನಿರ್ಮಾಣವಾಗಿದೆ ಸಾಧ್ಯವಾದಷ್ಟು ಹಿಂದಕ್ಕೆ ನೋಡಿ ಹಿಂದಿನ ಶಾಶ್ವತವಾದ ಬತ್ತಿಹೋಗದ ಬುಗ್ಗೆಗಳ ನೀರನ್ನು ಚೆನ್ನಾಗಿ ಹೀರಿ ಅದನ್ನು ತುಂಬಾ ಕುಡಿರಿ ನಂತರ ಮುಂದೆ ನೋಡಿ ಮುಂದಕ್ಕೆ ಸಾಗಿ ಭಾರತವನ್ನು ಹಿಂದಿನಕ್ಕಿಂತ ಉಜ್ವಲವನ್ನಾಗಿ ಮಾಡಿ ಉನ್ನತವನ್ನಾಗಿ ಮಾಡಿ ನಮ್ಮ ಪೂರ್ವಜರು ಮಹಾನ್ ವ್ಯಕ್ತಿಗಳಾಗಿದ್ದಾರು ಮೊಟ್ಟಮೊದಲು ಅದನ್ನು ನೆನಪಿಸಿಕೊಳ್ಳಬೇಕು ನಮ್ಮ ಅಸ್ತಿತ್ವದ ಮೂಲವನ್ನು ನಾವು ತಿಳಿದುಕೊಳ್ಳಬೇಕು ಈಗಿರುವುದಕ್ಕಿಂತ ಮಹತ್ತಾದ ಭಾರತವನ್ನು ನಾವು ನಿರ್ಮಾಣ ಮಾಡಬೇಕು.
ಈಚಿನ ದಿನಗಳಲ್ಲಿ ಯಾರೂ ತಮ್ಮ ಹಿಂದಿನ ದಿನಗಳ ಕಡೆಗೆ ನೋಡುತ್ತಿರುತ್ತಾರೆಯೋ ಅವರನ್ನು ಎಲ್ಲರೂ ತೆಗಳುತ್ತಾರೆ ಭಾರತದ ಇಂತಹ ಎಲ್ಲಾ ಕಷ್ಟಗಳಿಗೂ ದುಃ ಸ್ಥಿತಿಗೂ ಹಿಂದಿನದನ್ನು ನೋಡುತ್ತಿರುವುದೇ ಕಾರಣ ಎಂದು ಹೇಳಲಾಗುತ್ತಿದೆ ಆದರೆ ನನಗೆ ಇದಕ್ಕೆ ತದ್ವಿರುದ್ಧವಾದುದೇ ಸರಿ ಎಂದು ತೋರುತ್ತದೆ ಎಲ್ಲಿಯತನಕ ತನ್ನ ಗತಕಾಲವನ್ನು ಮರೆಯುತ್ತೇವೆ ಅಲ್ಲಿಯತನಕ ಹಿಂದೂ ರಾಷ್ಟ್ರ ಜಡವಾಗಿತ್ತು ಅದಕ್ಕೆ ಮಂಕು ಕವಿದಿತ್ತು ಅದು ಹಿಂದಿನದ್ದನ್ನು ಅವಲೋಕಿಸಲು ಆರಂಭಿಸುತ್ತಿದ್ದಂತೆಯೇ ಜೀವನದ ಎಲ್ಲ ಮಗ್ಗುಲುಗಳಲ್ಲಿ ಹೊಸ ಚೈತನ್ಯ ವ್ಯಕ್ತವಾಗುತ್ತಿದೆ ಹಿಂದಿನದವರಿಂದ ಭವಿಷ್ಯವನ್ನು ಏರಕಹೂಯ್ಯಬೇಕು ಮುಂದಿನ ಭವಿಷ್ಯತ್ ಆಗುತ್ತದೆ.
ಹಿಂದುಗಳ ತಮ್ಮ ಹಿಂದಿನದನ್ನು ಹೆಚ್ಚು ಹೆಚ್ಚು ಅಧ್ಯಯನ ಮಾಡಿದಷ್ಟು ಭಾರತದ ಭವಿಷ್ಯವು ಹೆಚ್ಚೆಚ್ಚು ಉಜ್ವಲವಾಗವಾಗುವುದು ಯಾರಾದರೂ ತಮ್ಮ ಗತಕಾಲದ ವೈಭವದ ಸಂಗತಿಯನ್ನು ಪ್ರತಿಯೊಬ್ಬರ ಮನೆಯ ಬಾಗಿಲಿಗೆ ತಂದು ಮುಟ್ಟಿಸುತ್ತಾರೂ ಅವರು ರಾಷ್ಟ್ರಕ್ಕೆ ಹಿತವನ್ನು ಉಂಟುಮಾಡುವ ಮಹಾನ್ ದೇಶಭಕ್ತ ಹಾಗೂ ಸೇವಕರು ಭಾರತದ ಅವನತಿಯಾದುದು ನಮ್ಮ ಪೂರ್ವಜರು ರೂಪಿಸಿದ್ದ ನೀತಿ-ನಿಯಮಗಳು ಸಂಪ್ರದಾಯಗಳು ಕೆಟ್ಟ ವಾಗಿದ್ದವು ಎಂಬ ಕಾರಣಕ್ಕಲ್ಲ ಅವುಗಳನ್ನು ನ್ಯಾಯೋಚಿತ ನಿರ್ಧಾರದಿಂದ ಜಾರಿಗೆ ತರದೇ ಇದ್ದದ್ದರಿಂದ.
3: ದೇಶದ ಮಹಾಪುರುಷರನ್ನು ಗೌರವಿಸಿ
ಮಹಾತ್ಮರ ಪೂಜೆಯನ್ನು ನೀವು ಉಪಕ್ರಮಮಾಡಬೇಕು ನಿತ್ಯಸತ್ಯಗಳನ್ನು ಯಾರು ಸಾಕ್ಷಾತ್ಕಾರಿಕೊಂಡಿದ್ದಾರೆಯೊ ಅವರ ಆದರ್ಶಪುರಷರನ್ನಾಗಿಸಿಕೊಂಡು ಅವರ ಹಾದಿಯನ್ನು ಅನುಸರಿಸಲು ಜನರನ್ನು ಪ್ರೇರೇಪಿಸಬೇಕು ಭಾರತದಲ್ಲಿ ಶ್ರೀ ರಾಮಚಂದ್ರ ಶ್ರೀ ಕ್ರಷ್ಣ ಮತ್ತು ಶ್ರೀ ರಾಮಕೃಷ್ಣರಂತಹ ಮಹಾಪುರುಷರು ನಮ್ಮ ಆದರ್ಶವಾಗಬೇಕು ಶ್ರೀ ರಾಮಚಂದ್ರ ಮತ್ತು ಮಹಾವೀರ ಇವರುಗಳ ಪೂಜೆಯನ್ನು ಈ ದೇಶದಲ್ಲಿ ಪ್ರಚಲಿತಗೊಳಿಸಬಲ್ಲಿರಾ ಸಿಂಹಗರ್ಜನೆಯಂತಹ ದ್ವನಿಯಿಂದ ಗೀತೆಯನ್ನು ಉಪದೇಶಿಸುತ್ತಿರುವ ಶ್ರೀ ಕ್ರಷ್ಣನ ಪೂಜೆಯನ್ನು ಜಾರಿಗೆ ತರಬಲ್ಲಿರಾ ಅತಂಹ ಓರ್ವ ವೀರ ಯಾರ ನರ ನಾಡಿಗಳಲ್ಲೂ ಮಡಿಯಿಂದ ಅಡಿಯವರಿಗೂ ಪ್ರಚಂಡ ರಜಸ್ಸು ರಭಸದಿಂದ ಉತ್ಸಾಹದಿಂದ ಪ್ರವಹಿಸುತ್ತಿದೆಯೊ ಅಂತಹ ವೀರ ಯಾರ ಸತ್ಯವನ್ನು ತಿಳಿಯಲು ಧೈರ್ಯವಾಗಿ ಮೃತ್ಯುವನ್ನೇ ಎದರಿಸುತ್ತಾನೆಯೋ ತ್ಯಾಗವು ಯಾರ ಕವಚವೊ ವಿವೇಕವು ಕತ್ತಿಯೊ ಅಂತಹ ವೀರನ ಆದರ್ಶ ನಮಗಿಂದು ಬೇಕಾಗಿದೆ.
4: ಶಿಕ್ಷಣ ಆದ್ಯ ಅವಶ್ಯಕತೆ
ಶಿಕ್ಷಣ ಶಿಕ್ಷಣ ಕೇವಲ ಶಿಕ್ಷಣ ಯೂರೋಪಿನ ಅನೇಕ ನಗರಗಳ ಮೂಲಕ ಪ್ರಯಾಣ ಮಾಡುತ್ತಿದ್ದಾಗ ಅಲ್ಲಿನ ಬಡಜನರಿಗೂ ಕೂಡಾ ಸೌಲಭ್ಯಗಳು ಮತ್ತು ಶಿಕ್ಷಣ ಲಭಿಸಿರುವುದನ್ನು ಕಂಡಾಗ ನಮ್ಮವರೇ ಆದ ಜನರ ಸ್ಥಿತಿ ನಮ್ಮ ಕಣ್ಣಮುಂದೆ ಬರುತ್ತಿತ್ತು ಮತ್ತು ಅದರಿಂದಾಗಿ ಕಣ್ಣುಗಳಲ್ಲಿ ನೀರು ತುಂಬುತ್ತಿತ್ತು ಏತಕ್ಕಾಗಿ ಹೀಗೆ ಅದಕ್ಕೆ ಕಾರಣ ಶಿಕ್ಷಣ ಎಂಬುದು ನನಗೆ ಅರಿವಾಯಿತು ಶಿಕ್ಷಣದಿಂದಾಗಿ ಆತ್ಮವಿಶ್ವಾಸ ಮೂಡುತ್ತದೆ ಈ ಆತ್ಮವಿಶ್ವಾಸದಿಂದ ಆ ದೇಶಗಳ ಜನರಲ್ಲಿ ಅಂತರ್ಯಾಮಿಯಾಗಿರುವ ಬ್ರಹ್ಮನು ಜಾಗ್ರತನಾಗುತ್ತಾನೆ ಇದ್ದಾನೆ ಆದರೆವನಮ್ಮಲ್ಲಿರುವ ಬ್ರಹ್ಮನು ಕ್ರಮೇಣ ಸುಪ್ತನಾಗುತ್ತಾ ಇದ್ದಾನೆ
ಶಿಕ್ಷಣವೆಂದರೆ ನಿಮ್ಮ ಮೆದುಳಿನಲ್ಲಿ ಆಗಾದವಾದ ಮಾಹಿತಿಗಳನ್ನು ತುಂಬಿ ಅವು ಅಲ್ಲಿ ಗೊಂದಲವನ್ನು ಉಂಟುಮಾಡುವುದಲ್ಲ ಅವುಗಳನ್ನು ಅರಗಿಸಿಕೊಳ್ಳದೇ ಅರ್ಜೀಣವನ್ನು ಉಂಟುಮಾಡುವುದಲ್ಲ ಜೀವನವನ್ನು ನಿರ್ಮಾಣ ಮಾಡುವ ಚಾರಿತ್ರ್ಯವನ್ನು ಬೆಳಿಸುವ ವಿಚಾರಗಳನ್ನು ಅಳವಡಿಸಿಕೊಳ್ಳುವಂತೆ ಮಾಡುವುದೇ ಶಿಕ್ಷಣ ಯಾವುದಾದರೂ ಐದು ವಿಚಾರಗಳನ್ನು ಅರ್ಥಮಾಡಿಕಂಡು ವಿಶಿಷ್ಟ ಲಕ್ಷಣವನ್ನಾಗಿ ಮಾಡಿಕೊಂಡರೆ ಸಾಕು ಪುಸ್ತಕಾಲಯದಲ್ಲಿರುವುದನ್ನೆಲ್ಲ ಕಂಠಸ್ಥ ಮಾಡಿ ಕೊಂಡಿರುವವರಿಗಿಂತ ನೀನು ಹೆಚ್ಚು ವಿದ್ಯಾವಂತ ನಮಗೆ ಅವಶ್ಯಕವಾದ ಆದರ್ಶ ಶಿಕ್ಷಣ ಹೇಗಿರಬೇಕೆಂದರೆ ನಮ್ಮ ದೇಶದಲ್ಲಿನ ಶಿಕ್ಷಣ ಆಧ್ಯಾತ್ಮಿಕ ದೃಷ್ಟಿಯುಳ್ಳದ್ದಾಗಿರಬೇಕು ಜಾತ್ಯತೀತವಾಗಿರಬೇಕು ಅದು ನಮ್ಮ ರಾಷ್ಟ್ರೀಯ ಚಿಂತನದಾರೆ ರಾಷ್ಟ್ರೀಯ ವಿಧಿವಿದಾನಗಳಿಗೆ ಅನುಸಾರವಾಗಿ ಇರಬೇಕು ಶಿಕ್ಷಣ ಕ್ಷೇತ್ರವು ನಮ್ಮ ಹಿಡಿತದಲ್ಲಿ ಇರಬೇಕು.
6: ಯುವಕರು ಮುಂದೆ ಬರಬೇಕು
ಜೀವಿತವು ಅಲ್ಪಕಾಲದ್ದು ಆದ್ದರಿಂದ ಜಾಗ್ರತಗೊಳ್ಳಿ ನಿಮ್ಮ ಹಂಬಲ ವಕೀಲರಾಗುವುದು ಜಗಳ ತೆಗೆಯುವುದು ಇದೇ ಮುಂತಾದ ವ್ರತ್ತಿಗಳಿಗೆ ಜೋತು ಬೀಳುವುದಕ್ಕಿಂತ ಇನ್ನೂ ಮಹತ್ವರ ಕಾರ್ಯವನ್ನು ಮಾಡಬೇಕಾಗಿದೆ ಎಲ್ಲ ಕಾರ್ಯಗಳಿಗಿಂತ ಮಹತ್ತಾದ ಕಾರ್ಯವೆಂದರೆ ನಿನ್ನ ಜನರ ಹಿತಕ್ಕಾಗಿ ಮಾನವತೆಯ ಹಿತಕ್ಕಾಗಿ ನಿನ್ನನು ನೀನು ಸಮರ್ಥಿಸಿಕೊಳ್ಳುವುದು ಅದಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡುವುದು ಈ ಜೀವನದಲ್ಲಿ ಏನಿದೆ ಮಹಾ ಒಂದು ಶ್ರೇಷ್ಠವಾದ ಆದರ್ಶವನ್ನು ಅರಿಸಿಕೊಳ್ಳುವ ಮತ್ತು ಅದಕ್ಕಾಗಿ ಜೀವನವನ್ನು ಮುಡುಪಾಗಿಡೋಣ ಇದು ನಮ್ಮ ದೊಡ್ಡ ಸಂಕಲ್ಪವಾಗಬೇಕು ನನ್ನ ವಿಶ್ವಾಸ ಯುವಪೀಳಿಗೆಯಲ್ಲಿ ಇದೆ ಇಂದಿನ ಪೀಳಿಗೆಯಲ್ಲಿ ಅವರ ಸಮಸ್ಯೆಗಳನ್ನು ಬಗೆಹರಿಸಿ ಕಾರ್ಯವನ್ನು ನಿಭಾಯಿಸುತ್ತಾರೆ ಸಿಂಹಗಳಂತೆ ತಮ್ಮ ಕಾರ್ಯವನ್ನು ಮಾಡಲು ಮುಂದೆ ಬರುವ ಯುವಕರಿಗಾಗಿ ಮೂರು ಅವಶ್ಯಕತೆಗಳನ್ನು ಸ್ವಾಮಿಜೀ ಸೂಚಿಸಿದ್ದಾರೆ
1:ಅಂತಃಕರಣಪೂರ್ವಕ ಸ್ಪಂದಿಸಬೇಕು
2:ಸಮಸ್ಯೆಗೆ ಪರಿಹಾರ ಗೊತ್ತಿರಬೇಕು
3:ಪರಿಶುದ್ದವಾದ ಉದ್ದೇಶ ಮತ್ತು ಆದಮ್ಯ ಸಂಕಲ್ಪವಾಗಬೇಕು
ಸ್ವಾಮಿ ವಿವೇಕಾನಂದರು ಈ ಆರು ಪುನರುಜ್ಜೀವನ ಮಾರ್ಗವನ್ನು ನಮಗೆ ರಚಿಸಿ ಕೊಟ್ಟು ಹೋಗಿದ್ದಾರೆ ಈ ಎಲ್ಲಾ ಮಾರ್ಗವನ್ನು ನಾವು ಕಾರ್ಯರೂಪಕ್ಕೆ ತರುವುದು ನಮ್ಮ ಯುವ ಪೀಳಿಗೆ ಯಲ್ಲಿದೆ ಆದಷ್ಟು ಬೇಗ ಸ್ವಾಮಿ ವಿವೇಕಾನಂದರ ಯೋಜನೆಗಳು ಕಾರ್ಯಗತಗೊಳಿಸಬೇಕು. ಪ್ರಕಾರ ರಾಷ್ಟ್ರವಾದಿಯಾದ ಶ್ರೀ ಸ್ವಾಮಿ ವಿವೇಕಾನಂದ ಜಯಂತಿಯ ಹಾರ್ದಿಕ ಶುಭಾಶಯಗಳು.
-ಮನೋಜ್ ಕಪ್ಪತನವರ


