ಪೌರತ್ವ ಮಸೂದೆ ಕಾಯ್ದೆ - ೨೦೧೯
೨೦೧೪ ರ ಡಿಸೆಂಬರ್ ೩೧ ರಂದು ಅಥವಾ ಅದಕ್ಕೂ ಮೊದಲು ಭಾರತಕ್ಕೆ ಪ್ರವೇಶಿಸಿದ ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಹಿಂದೂ, ಸಿಖ್ಖ, ಬೌದ್ಧ, ಜೈನ, ಪಾರ್ಸಿ ಮತ್ತು ಅಕ್ರಮ ವಲಸಿಗರನ್ನು ಭಾರತೀಯ ಪೌರತ್ವಕ್ಕೆ ಅರ್ಹರನ್ನಾಗಿ ಮಾಡಲು ೧೯೫೫ ರ ಪೌರತ್ವ ಕಾಯ್ದೆಗೆ ಮಸೂದೆ ತಿದ್ದುಪಡಿ ಮಾಡಿದೆ. ಈ ಕಾಯಿದೆಯಡಿ, ನೈಸರ್ಗಿಕೀಕರಣದ ಮೂಲಕ ಪೌರತ್ವಕ್ಕಾಗಿ ಒಂದು ಅವಶ್ಯಕತೆಯೆಂದರೆ, ಅರ್ಜಿದಾರನು ಕಳೆದ 12 ತಿಂಗಳಿನಿಂದ ಭಾರತದಲ್ಲಿ ವಾಸಿಸುತ್ತಿರಬೇಕು. ಅದಲ್ಲದೆ, ಹಿಂದಿನ 14 ವರ್ಷಗಳಲ್ಲಿ ಕನಿಷ್ಠ 11 ವರ್ಷಗಳ ಕಾಲ ಭಾರತದಲ್ಲಿರಬೇಕು. ಆದರೆ ಈ ತಿದ್ದುಪಡಿಯು, ಮೂರು ದೇಶಗಳ,ಆರು ಧರ್ಮಗಳಿಗೆ ಸೇರಿದ ವ್ಯಕ್ತಿಗಳಿಗೆ ಈ 11 ವರ್ಷದ ಅಗತ್ಯವನ್ನು ಐದು ವರ್ಷಗಳವರೆಗೆ ಸಡಿಲಿಸುತ್ತದೆ. ಅದಲ್ಲದೆ, ಈ ಮಸೂದೆಯು ಅಸ್ಸಾಂ, ಮೇಘಾಲಯ, ಮಿಜೋರಾಂ, ಮತ್ತು ತ್ರಿಪುರದ ಬುಡಕಟ್ಟು ಪ್ರದೇಶಗಳನ್ನು ಸಂವಿಧಾನದ ಆರನೇ ವೇಳಾಪಟ್ಟಿಯಲ್ಲಿ ಸೇರಿಸಿದೆ. ಈ ಬುಡಕಟ್ಟು ಪ್ರದೇಶಗಳಲ್ಲಿ ಅಸ್ಸಾಂನ ಕಾರ್ಬಿ ಆಂಗ್ಲಾಂಗ್, ಮೇಘಾಲಯದ ಗಾರೊ ಹಿಲ್ಸ್, ಮಿಜೋರಾಂನ ಚಕ್ಮಾ ಜಿಲ್ಲೆ ಮತ್ತು ತ್ರಿಪುರದ ಕೆಲ ಬುಡಕಟ್ಟು ಪ್ರದೇಶಗಳು ಸೇರಿವೆ. ಅರುಣಾಚಲ ಪ್ರದೇಶ, ಮಿಜೋರಾಂ ಮತ್ತು ನಾಗಾಲ್ಯಾಂಡ್ ಅನ್ನು ಒಳಗೊಂಡಿರುವ ಇನ್ನರ್ ಲೈನ್ ಪರ್ಮಿಟ್ ಮೂಲಕ ನಿಯಂತ್ರಿಸಲ್ಪಡುವ ಪ್ರದೇಶಗಳಿಗೆ ಈ ತಿದ್ದುಪಡಿಯಿಂದ ವಿನಾಯಿತಿ ನೀಡಿದೆ ಹಾಗೂ ಮಣಿಪುರವನ್ನು ಇನ್ನರ್ ಲೈನ್ ಪರ್ಮಿಟ್ನಲ್ಲಿ ಸೇರ್ಪಡೆಗೊಳಿಸುವುದನ್ನು ೧೦ ಡಿಸೆಂಬರ್ ೨೦೧೯ ರಂದು ಘೋಷಿಸಲಾಗಿದೆ.
ಭಾರತದ ಸಾಗರೋತ್ತರ ಪೌರತ್ವ (ಓಸಿಐ) ಹೊಂದಿರುವವರು ನೋಂದಣಿಯಾದ ಐದು ವರ್ಷಗಳಲ್ಲಿ, ಎರಡು ಅಥವಾ ಹೆಚ್ಚಿನ ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಿದರೆ ಆಥವಾ ಅಗತ್ಯದ ಸಂದರ್ಭದಲ್ಲಿ ವಂಚನೆಯ ಮೂಲಕ ನೋಂದಣಿಯನ್ನು ಮಾಡಿಸಿದರೆ, ಭಾರತದ ಸಾರ್ವಭೌಮತ್ವದ ಹಿತದೃಷ್ಟಿಯಿಂದ, ಸಾಗರೋತ್ತರ ಪೌರತ್ವ ನೋಂದಣಿಯನ್ನು ರದ್ದುಗೊಳಿಸುವ ಹೊಸ ನಿಬಂಧನೆಗಳನ್ನು ಮಸೂದೆಯು ಒಳಗೊಂಡಿದ


ಪೌರತ್ವ (ತಿದ್ದುಪಡಿ) ಮಸೂದೆ, ೨೦೧೯, ೧೯೯೫ರ ಪೌರತ್ವ ಕಾಯ್ದೆಗೆ ತಿದ್ದುಪಡಿ ಮಾಡುವ ಮಸೂದೆಯಾಗಿದ್ದು, ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳ ಪೌರತ್ವ ನೀಡುವ ಉದ್ದೇಶವನ್ನು ಹೊಂದಿದೆ. ಆ ಆರು ಧರ್ಮದವರು ಭಾರತಕ್ಕೆ ೩೧ ಡಿಸೆಂಬರ್ ೨೦೧೪ ಅಥವಾ ಅದಕ್ಕಿಂತಲೂ ಮೊದಲು ಪ್ರವೇಶಿಸಿದವರಾಗಿದ್ದಲ್ಲಿ, ಅವರೆಲ್ಲರೂ ಭಾರತೀಯ ಪೌರತ್ವಕ್ಕೆ ಅರ್ಹರು
ಕೇಂದ್ರ ಸಚಿವ ಸಂಪುಟವು ೪ ಡಿಸೆಂಬರ್ ೨೦೧೯ ರಂದು ಮಸೂದೆಯನ್ನು ಮುಂದಿಟ್ಟಿತು. ಇದನ್ನು ಡಿಸೆಂಬರ್ ೧೦ ರಂದು ಲೋಕಸಭೆಯು ಅಂಗೀಕರಿಸಿತು ಹಾಗೂ ಡಿಸೆಂಬರ್ ೧೧ ರಂದು ರಾಜ್ಯಸಭೆಯು ಇದನ್ನು ಅಂಗೀಕಾರ ಮಾಡಿತು
ಹಿನ್ನೆಲೆ
ಭಾರತೀಯ ಜನತಾ ಪಕ್ಷವು ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಪೌರತ್ವ ನೀಡುವುದಾಗಿ ಭರವಸೆಯನ್ನು ನೀಡಿತ್ತು.೨೦೧೪ರಲ್ಲಿ ಬಿಜೆಪಿ ಪಕ್ಷವು, ಚುನಾವಣಾ ಪ್ರಣಾಳಿಕೆಯಲ್ಲಿ, ಹಿಂದೂ ನಿರಾಶ್ರಿತರನ್ನು ಸ್ವಾಗತಿಸಿ ಅವರಿಗೆ ಆಶ್ರಯ ನೀಡುವುದಾಗಿ ಭರವಸೆ ನೀಡಿತ್ತು. ಪೌರತ್ವ (ತಿದ್ದುಪಡಿ) ಮಸೂದೆ, ೨೦೧೬ ನ್ನು ಲೋಕಸಭೆಯಲ್ಲಿ ಪರಿಚಯಿಸಲಾಯಿತು ಮತ್ತು ಅಂಗೀಕರಿಸಲಾಯಿತು. ಆದರೆ ಈಶಾನ್ಯ ಭಾರತದಲ್ಲಿ ವ್ಯಾಪಕ ರಾಜಕೀಯ ವಿರೋಧ ಮತ್ತು ಪ್ರತಿಭಟನೆಗಳು ನಡೆದವು. ಅವರ ಮುಖ್ಯ ಕಾಳಜಿ ಏನಾಗಿತ್ತೆಂದರೆ, ಬಾಂಗ್ಲಾದೇಶದಿಂದ ಜನರು ವಲಸೆ ಬಂದರೆ, ಈಶಾನ್ಯ ಭಾರತದ ಜನಸಂಖ್ಯಾಶಾಸ್ತ್ರವು ಬದಲಾಗುತ್ತದೆ. ಹಾಗಾಗಿ, ಇದನ್ನು ಅನುಸರಿಸಿ, ಈಶಾನ್ಯ ಭಾರತದ ರಾಜ್ಯಗಳನ್ನು ಮಸೂದೆಯ ನಿಬಂಧನೆಗಳಿಂದ ಹೊರಗಿಟ್ಟು, ೨೦೧೯ ರ ಮಸೂದೆಯನ್ನು ಅಂಗೀಕರಿಸಲಾಯಿತು
ತರುವಾಯ, ಕೇಂದ್ರ ಸಚಿವ ಸಂಪುಟ ೨೦೧೯ ರ ಪೌರತ್ವ (ತಿದ್ದುಪಡಿ) ಮಸೂದೆಯನ್ನು ೨೦೧೯ರ ಡಿಸೆಂಬರ್ ೪ ರಂದು ಸಂಸತ್ತಿನಲ್ಲಿ ಪರಿಚಯಿಸಲು ತೆರವುಗೊಳಿಸಿತು. ಈ ಮಸೂದೆಯನ್ನು ೧೭ನೇ ಲೋಕಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಅವರು ೯ ಡಿಸೆಂಬರ್ ೨೦೧೯ ರಂದು ಪರಿಚಯಿಸಿದರು ಮತ್ತು ೨೦೧೯ ರ ಡಿಸೆಂಬರ್ ೧೦ ರಂದು ಬೆಳಿಗ್ಗೆ, ೩೧೧ ಸಂಸದರು ಪರವಾಗಿ ಮತ್ತು ೮೦ ಸಂಸದರು ಮಸೂದೆ ವಿರುದ್ಧ ಮತ ಚಲಾಯಿಸಿದರು] ಇದನ್ನು ಡಿಸೆಂಬರ್ ೧೧ ರಂದು ರಾಜ್ಯಸಭೆಯು ಅಂಗೀಕರಿಸಿತು
ನಿಬಂಧನೆಗಳು
೨೦೧೪ ರ ಡಿಸೆಂಬರ್ ೩೧ ರಂದು ಅಥವಾ ಅದಕ್ಕೂ ಮೊದಲು ಭಾರತಕ್ಕೆ ಪ್ರವೇಶಿಸಿದ ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಹಿಂದೂ, ಸಿಖ್ಖ, ಬೌದ್ಧ, ಜೈನ, ಪಾರ್ಸಿ ಮತ್ತು ಅಕ್ರಮ ವಲಸಿಗರನ್ನು ಭಾರತೀಯ ಪೌರತ್ವಕ್ಕೆ ಅರ್ಹರನ್ನಾಗಿ ಮಾಡಲು ೧೯೫೫ ರ ಪೌರತ್ವ ಕಾಯ್ದೆಗೆ ಮಸೂದೆ ತಿದ್ದುಪಡಿ ಮಾಡಿದೆ. ಈ ಕಾಯಿದೆಯಡಿ, ನೈಸರ್ಗಿಕೀಕರಣದ ಮೂಲಕ ಪೌರತ್ವಕ್ಕಾಗಿ ಒಂದು ಅವಶ್ಯಕತೆಯೆಂದರೆ, ಅರ್ಜಿದಾರನು ಕಳೆದ 12 ತಿಂಗಳಿನಿಂದ ಭಾರತದಲ್ಲಿ ವಾಸಿಸುತ್ತಿರಬೇಕು. ಅದಲ್ಲದೆ, ಹಿಂದಿನ 14 ವರ್ಷಗಳಲ್ಲಿ ಕನಿಷ್ಠ 11 ವರ್ಷಗಳ ಕಾಲ ಭಾರತದಲ್ಲಿರಬೇಕು. ಆದರೆ ಈ ತಿದ್ದುಪಡಿಯು, ಮೂರು ದೇಶಗಳ,ಆರು ಧರ್ಮಗಳಿಗೆ ಸೇರಿದ ವ್ಯಕ್ತಿಗಳಿಗೆ ಈ 11 ವರ್ಷದ ಅಗತ್ಯವನ್ನು ಐದು ವರ್ಷಗಳವರೆಗೆ ಸಡಿಲಿಸುತ್ತದೆ. ಅದಲ್ಲದೆ, ಈ ಮಸೂದೆಯು ಅಸ್ಸಾಂ, ಮೇಘಾಲಯ, ಮಿಜೋರಾಂ, ಮತ್ತು ತ್ರಿಪುರದ ಬುಡಕಟ್ಟು ಪ್ರದೇಶಗಳನ್ನು ಸಂವಿಧಾನದ ಆರನೇ ವೇಳಾಪಟ್ಟಿಯಲ್ಲಿ ಸೇರಿಸಿದೆ. ಈ ಬುಡಕಟ್ಟು ಪ್ರದೇಶಗಳಲ್ಲಿ ಅಸ್ಸಾಂನ ಕಾರ್ಬಿ ಆಂಗ್ಲಾಂಗ್, ಮೇಘಾಲಯದ ಗಾರೊ ಹಿಲ್ಸ್, ಮಿಜೋರಾಂನ ಚಕ್ಮಾ ಜಿಲ್ಲೆ ಮತ್ತು ತ್ರಿಪುರದ ಕೆಲ ಬುಡಕಟ್ಟು ಪ್ರದೇಶಗಳು ಸೇರಿವೆ. ಅರುಣಾಚಲ ಪ್ರದೇಶ, ಮಿಜೋರಾಂ ಮತ್ತು ನಾಗಾಲ್ಯಾಂಡ್ ಅನ್ನು ಒಳಗೊಂಡಿರುವ ಇನ್ನರ್ ಲೈನ್ ಪರ್ಮಿಟ್ ಮೂಲಕ ನಿಯಂತ್ರಿಸಲ್ಪಡುವ ಪ್ರದೇಶಗಳಿಗೆ ಈ ತಿದ್ದುಪಡಿಯಿಂದ ವಿನಾಯಿತಿ ನೀಡಿದೆ ಹಾಗೂ ಮಣಿಪುರವನ್ನು ಇನ್ನರ್ ಲೈನ್ ಪರ್ಮಿಟ್ನಲ್ಲಿ ಸೇರ್ಪಡೆಗೊಳಿಸುವುದನ್ನು ೧೦ ಡಿಸೆಂಬರ್ ೨೦೧೯ ರಂದು ಘೋಷಿಸಲಾಗಿದೆ.
ಭಾರತದ ಸಾಗರೋತ್ತರ ಪೌರತ್ವ (ಓಸಿಐ) ಹೊಂದಿರುವವರು ನೋಂದಣಿಯಾದ ಐದು ವರ್ಷಗಳಲ್ಲಿ, ಎರಡು ಅಥವಾ ಹೆಚ್ಚಿನ ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಿದರೆ ಆಥವಾ ಅಗತ್ಯದ ಸಂದರ್ಭದಲ್ಲಿ ವಂಚನೆಯ ಮೂಲಕ ನೋಂದಣಿಯನ್ನು ಮಾಡಿಸಿದರೆ, ಭಾರತದ ಸಾರ್ವಭೌಮತ್ವದ ಹಿತದೃಷ್ಟಿಯಿಂದ, ಸಾಗರೋತ್ತರ ಪೌರತ್ವ ನೋಂದಣಿಯನ್ನು ರದ್ದುಗೊಳಿಸುವ ಹೊಸ ನಿಬಂಧನೆಗಳನ್ನು ಮಸೂದೆಯು ಒಳಗೊಂಡಿದ


